ಕೃಷಿ ವಿಜ್ಞಾನಿ ಮತ್ತು ಕಾದಂಬರಿಕಾರ ಡಾ. ಕೆ ಎನ್ ಗಣೇಶಯ್ಯನವರನ್ನು ಕನ್ನಡದ ಪ್ರಮುಖ ಸುದ್ದಿವಾಹಿನಿ TV18 ನವರು ಕೊಡ ಮಾಡುವ “ವರ್ಷದ  ಕನ್ನಡಿಗ-2021” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್, ಸಾಹಿತಿ ದೊಡ್ಡರಂಗೇಗೌಡ ಮತ್ತು ಇತರೆ ಗಣ್ಯರ ಆಯ್ಕೆ ಸಮಿತಿ, ಸಾಹಿತ್ಯ ವಿಭಾಗದಲ್ಲಿನ “ವರ್ಷದ ಕನ್ನಡಿಗ” ಪ್ರಶಸ್ತಿಗೆ ಲೇಖಕ ಡಾ. ಕೆ ಎನ್ ಗಣೇಶಯ್ಯನವರನ್ನು ಆಯ್ಕೆ ಮಾಡಿದೆ. ಇದೇ ಮಾರ್ಚ್ 26ರ ಸಂಜೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ